ರಿಯಾದ್. ಮೇ17: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಮಲಾಝ್ ಘಟಕದ ಮೊದಲನೇ ವಾರ್ಷಿಕ ಮಹಾಸಭೆಯು ಇಂದು ಜುಮಾ ನಮಾಜಿನ ಬಳಿಕ ಬತಃ ಕ್ಲಾಸಿಕ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತನವನ್ನು ರಿಯಾದ್ ಝೋನಲ್ ಅಧ್ಯಕ್ಷರಾದ ಅಬೂಬಕ್ಕರ್ ಪಡುಬಿದ್ರಿ ರವರು ವಹಿಸಿಕೊಂಡರು. ಅಬ್ದುಲ್ ಖಾದರ್ ಸಾದತ್ ಉಳ್ಳಾಲ್ ಇವರ ಕಿರಾಅತ್ ಪಾರಾಯಣದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುಸ್ತಫಾ ಸ ಅದಿ ಇವರು ತಮ್ಮ ಹಿತವಚನ ನೀಡುತ್ತ ಉದ್ಘಾಟಿಸಿದರು. ಉಸ್ತಾದ್ ಯೂಸುಫ್ ಸಖಾಫಿ ಬೈತಾರ್ ರವರು ಮುಖ್ಯ ಪ್ರಭಾಷಣವನ್ನು ನೀಡಿದರು. ಅದೇ ರೀತಿ ಮುಖ್ಯ ಅತಿಥಿಗಳಾಗಿ ಅಬೂಬಕ್ಕರ್ ಬೋಂದೆಲ್, ಸಿತಾರ್ ಮಹಮ್ಮದ್, ಇಸ್ಮಾಯಿಲ್ ಶಾಫಿ, ನಝೀರ್ ಕಾಶಿಪಟ್ನ, ದಾವೂದ್ ಕಜಮಾರ್, ಮನ್ಸೂರ್ ಕೃಷ್ನಾಪುರ, ಹನೀಫ್ ಪಾವೂರ್ ಹಾಗೂ ಶೌಕತ್ ಅಲಿ ಕೊಡಗು ಇವರು ಪಾಲ್ಗೊಂಡರು.
ಅಬ್ಬಾಸ್ ಉಳ್ಳಾಲ್ ರವರು ಮಲಾಝ್ ಘಟಕದ ಕಿರು ಪರಿಚಯವನ್ನು ಸಭಿಕರಿಗೆ ಪ್ರದರ್ಶಿಸುತ್ತಾ ಲೆಕ್ಕ ಪತ್ರ ವಿವರಣೆಯನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಗತ ಸಮಿತಿಯನ್ನು ವಿಸರ್ಜಿಸಿ ನೂತನ ಸಾಲಿನ ಸಮಿತಿಯನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ಬೋಂದೆಲ್ ಆಯ್ಕೆಗೊಂಡರೆ, ಉಪಾಧ್ಯಕ್ಷರಾಗಿ ಖಾಸಿಮ್ ತ್ವಲ್ ಹತ್ ಉಜಿರೆ, ಕಾರ್ಯದರ್ಶಿಯಾಗಿ ಮಹಮ್ಮದ್ ಕಲಂದರ್ ಪಾಣೆಮಂಗಳೂರು, ಸಹಕಾರ್ಯದರ್ಶಿಯಾಗಿ ಮನ್ಸೂರ್ ಅಲಿ ಪಡಿಕ್ಕಲ್, ಖಜಾಂಜಿಯಾಗಿ ಅಬ್ದುಲ್ ಜಲೀಲ್ ದೇರಳಕಟ್ಟೆ, ಸಂಚಾಲಕರಾಗಿ ಮಹಮ್ಮದ್ ಸಿತಾರ್, ಸಲಹೆಗಾರರಾಗಿ ಇಬ್ರಾಹಿಂ ಪಡಿಕ್ಕಲ್ ಮತ್ತು ಹನೀಫ್ ಎನ್.ಎಸ್. ಕೈರಂಗಳ ಹಾಗೂ ಲೆಕ್ಕ ಪರಿಶೋಧಕರಾಗಿ ಅಬ್ಬಾಸ್ ಉಳ್ಳಾಲ್ ರವರು ಆಯ್ಕೆಗೊಂಡರು. ಸಮಿತಿ ಸಭೆಯ ಸದಸ್ಯರಾಗಿ ಅಬ್ದುಲ್ ಖಾದರ್ ಸಾದತ್ ಉಳ್ಳಾಲ್, ಝಹೀರ್ ಅಬ್ಬಾಸ್ ಉಳ್ಳಾಲ್, ಅನ್ಸಾರ್ ಮಹಮ್ಮದ್ ಉಳ್ಳಾಲ್, ಅಬೂಬಕ್ಕರ್ ಮೊಂಟೆಪದವು, ಅಬ್ಬಾಸ್ ಇಸ್ಮಾಯಿಲ್ ಮೊಂಟೆಪದವು, ಎಂ.ಕೆ. ಬಶೀರ್ ಮಟ, ರಹ್ಮತುಲ್ಲಾ ಸಿದ್ದೀಕ್ ಉಳ್ಳಾಲ್, ಸಮೀರ್ ಮಹಮ್ಮದ್ ಉಳ್ಳಾಲ್, ಮಹಮ್ಮದ್ ಹಸೈನಾರ್ ಝುಹುರಿ ಮಂಜನಾಡಿ, ಬಶೀರ್ ಕಿನ್ನಿಗೋಳಿ, ಅಬ್ದುಲ್ ಲತೀಫ್ ಬೋಂದೆಲ್, ಹನೀಫ್ ಬಿ.ಸಿ ರೋಡು, ಬಶೀರ್ ಬಿ.ಸಿ ರೋಡು, ಸರ್ಫ್ರಾಝ್ ಪಡುಬಿದ್ರಿ ಇವರನ್ನು ನೇಮಿಸಲಾಯಿತು. ಹನೀಫ್ ಎನ್.ಎಸ್ ಕೈರಂಗಳ ರವರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯದಾಗಿ ಧನ್ಯವಾದ ಸಮರ್ಪಿಸಿದರು.
No comments:
Post a Comment